ಕಳೆದ ನವೆಂಬರ್ ತಿಂಗಳಿನಲ್ಲಿ ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಿಕೊಂಡ ‘ಮಂಡ್ಯ ಟು ಮುಂಬೈ’ ಕನ್ನಡ ಸಿನೆಮಾ ಆಗಸ್ಟ್ ಎರಡನೇ ವಾರದಲ್ಲಿ ಬಿಡುಗಡೆ ಆಗಲು ಸಜ್ಜಾಗುತ್ತ ಇದೆ. ಈ ಚಿತ್ರಕ್ಕೆ ಮೊದಲು ‘ಆನೆಕೆರೆ ಬೀದಿ’ ಎಂದು ನಾಮಕರಣ ಮಾಡಲಾಗಿತ್ತು. ಕಾರಣಾಂತರಗಳಿಂದ ಶೀರ್ಷಿಕೆಯನ್ನು ನಿರ್ದೇಶಕರು ಬದಲಿಸಿದ್ದಾರೆ.
ಕನ್ನಡದ ಸುಪ್ರಸಿದ್ದ ವಾದ್ಯಗಾರ ಡ್ರಮ್ಮರ್ ದೇವ ಅವರ ಪುತ್ರ ಜೋಸೆಫ್ ಅವರು ವಾರ್ಧಿಕ್ ಜೋಸೆಫ್ ಎಂಬ ಹೆಸರಿನಲ್ಲಿ ಪ್ರಥಮ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ಮೈಸೂರು, ಮಂಡ್ಯ,ಬೆಂಗಳೂರು, ಚಿತ್ರದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರಕ್ಕೆ ದರ್ಶನ್ ಕನಕ ಹಾಗೂ ವಿಶ್ವೇಶ್ ಶಿವಪ್ರಸಾದ್ ಛಾಯಾಗ್ರಾಹಕರು. ಚರಣ್ ಅವರು ಸಂಗೀತ ಒದಗಿಸಿದ್ದಾರೆ.
ಶ್ರೀಕಿ, ಸಂಜನಾ, ನವೀನ್ ಕೃಷ್ಣ, ಮಾಧುರಿ, ಶೇಖರ್, ಚಂದನ, ಚಿರಂತ್ ತಾರಾಗಣದಲ್ಲಿ ಇದ್ದಾರೆ. ಜ್ಯೋತಿರ್ಲಿಂಗಮ್ ಈ ಚಿತ್ರದ ನಿರ್ಮಾಪಕರು.